Karnataka Bhagya
Blogದೇಶ

ಬೆಂಗಳೂರಿನ ರಸ್ತೆ ಇನ್ನಾಗಲಿದೆ “ಪುನೀತ”

ಹಲವಾರು ಸಾಧನೆಗಳಿಗೆ, ಸಾಧಕರಿಗೆ ದಾರಿದೀಪವಾಗಿರೋ ಯುವರತ್ನ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ದಾರಿಯೊಂದಕ್ಕೆ ಇಡೋ ಯೋಜನೆಯನ್ನ ‘ಬಿಬಿಎಂಪಿ’ ಹಾಕಿಕೊಂಡಿದೆ. ತಮ್ಮ ಈ ಯೋಜನೆಯನ್ನ ಸ್ವತಃ ‘ಬಿಬಿಎಂಪಿ’ ಜನರ ಎದುರಿಗಿಟ್ಟಿದೆ.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)’ ಹೇಳಿಕೊಂಡಂತೆ ಮೈಸೂರ್ ರಸ್ತೆಯಲ್ಲಿರೋ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರ್ಘಟ್ಟ ರಸ್ತೆಯಲ್ಲಿರೋ ವೆಗ ಸಿಟಿ ಮಾಲ್ ವರೆಗಿನ ರಸ್ತೆಯನ್ನು ಪುನೀತ್ ರಾಜಕುಮಾರ್ ಹೆಸರಿನಿಂದ ನಾಮಕರಣ ಮಾಡಲಾಗುವುದು. ಬಿಬಿಎಂಪಿಯ ಈ ನಿರ್ಧಾರದಿಂದ ಅಭಿಮಾನಿಗಳು ಸಂತುಷ್ಟರಾಗುವುದಲ್ಲಿ ಅನುಮಾನವಿಲ್ಲ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿರೋ ರಸ್ತೆಯೊಂದನ್ನು ಅಲ್ಲಿನ ಪುನೀತ್ ಅಭಿಮಾನಿಗಳೇ ಸ್ವಯಂಪ್ರೇರಿತರಾಗಿ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಘೋಷಣೆ ಮಾಡಿದ್ದರು. ಇದೀಗ ಆ ಸಾಲಿಗೆ ಬೆಂಗಳೂರಿನ ರಸ್ತೆಯೊಂದು ಸೇರ್ಪಡೆಯಾಗುತ್ತಿರುವುದೇ ಸಂತಸ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಂದಿರೋ ಅಭಿಮಾನಿ ಬಳಗಕ್ಕೆ ಸಾಟಿಯೇ ಇಲ್ಲ. ಪುನೀತ್ ನಮ್ಮನ್ನೆಲ್ಲ ಅಗಲಿದಾಗ ಮರುಗಿದ ಜನಸಾಗರಕ್ಕೆ ಲೆಕ್ಕವೇ ಇಲ್ಲ. ಅಂತಹ ಅಪೂರ್ವ, ಅದ್ಭುತ ವ್ಯಕ್ತಿತ್ವ ಅವರದ್ದು. ಇದೀಗ ಬಿಬಿಎಂಪಿಯ ಈ ನಡೆಯಿಂದ ಪುನೀತ್ ರ ನೆನಪಿಗೆ ಇನ್ನೊಂದಿಷ್ಟು ಶಕ್ತಿ ಬಂದಂತಾಗಿದೆ.

Related posts

ಸಿಲ್ವರ್ ಸ್ಕ್ರೀನ್ ಮೇಲೆ ನಿಖಿಲ್ ರೈಡಿಂಗ್ ಶುರು

Karnatakabhagya

ಆ್ಯಕ್ಟರ್ ಆಗಿ ಭಡ್ತಿ ಪಡೆದ ರ್ಯಾಪರ್ ಇವರೇ ನೋಡಿ

Nikita Agrawal

ದರ್ಶನ್ ಅಭಿಮಾನಿಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಹಿತಿ ಗೊ ರು ಚನ್ನಬಸಪ್ಪ

Karnatakabhagya

Leave a Comment

Share via
Copy link
Powered by Social Snap