22.9 C
Bengaluru
August 13, 2026
Karnataka Bhagya
Blogಕಲೆ/ಸಾಹಿತ್ಯ

ಹೊಸ ಸಾಹಸಕ್ಕೆ ಮುಂದಾದ ವಸಿಷ್ಠ ಸಿಂಹ… ಏನು ಗೊತ್ತಾ?

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ವಸಿಷ್ಠ ಸಿಂಹ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಟ, ವಿಲನ್, ಹೀರೋ ಆಗಿ ಗುರುತಿಸಿಕೊಂಡಿರುವ ವಶಿಷ್ಠ ಸಿಂಹ ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ಅವರೇ ಘೋಷಿಸಿದ್ದಾರೆ.

“ಸಿಂಹ ಆಡಿಯೋ ” ಎಂಬ ಲೇಬಲ್ ನ್ನು ಆರಂಭಿಸಿರುವ ವಶಿಷ್ಠ ಸಿಂಹ ಅವರ ನಟನೆಯ ಕಾಲಚಕ್ರ ಸಿನಿಮಾದ ನೀನೇ ಬೇಕು ಹಾಡು ಅವರ ಸಿಂಹ ಆಡಿಯೋ ಮೂಲಕ ಎಪ್ರಿಲ್ 4ಕ್ಕೆ ರಿಲೀಸ್ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸಗೊಂಡಿದ್ದು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಈ ಆಡಿಯೋ ಲೇಬಲ್ ನಿಂದ ಇನ್ನೂ ಹೆಚ್ಚು ಹಾಡುಗಳು ಬಿಡುಗಡೆ ಆಗಲಿ ಎಂದು ಹಾರೈಸಿದ್ದಾರೆ.

ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ವಿವಿಧ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ರಶ್ಮಿಕೆ ನಿರ್ದೇಶನ ಮಾಡಿದ್ದಾರೆ. ರಕ್ಷಾ , ಸುಚೇಂದ್ರ ಪ್ರಸಾದ್ , ದೀಪಕ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.

ಇನ್ನು ನಟನೆಯ ಹೊರತಾಗು ಗಾಯಕರಾಗಿಯೂ ಗುರುತಿಸಿಕೊಂಡಿರುವ ವಸಿಷ್ಠ ಕಿರಿಕ್ ಪಾರ್ಟಿ ಚಿತ್ರದ ನೀಚ ಸುಳ್ಳು ಸುತ್ತೋ ನಾಲಿಗೆ, ದಯವಿಟ್ಟು ಗಮನಿಸಿ ಚಿತ್ರದ ಮರೆತೇ ಹೋದೆನು ಮುಂತಾದ ಹಾಡುಗಳನ್ನು ಹಾಡಿದ್ದಾರೆ. ಸಂಗೀತದ ಮೇಲೆ ಆಸಕ್ತಿ ಹೊಂದಿರುವ ಕಾರಣ ಈ ಸಂಸ್ಥೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

Related posts

ಉಪ್ಪಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರು

Nikita Agrawal

ಕೆಜಿಎಫ್ ಬಗ್ಗೆ ಅಧೀರನ ಮನದಾಳದ ಮಾತು

Nikita Agrawal

ತೂಕ ಇಳಿಸಲು ಟಿಪ್ಸ್ ಕೊಟ್ಟ ಬೆಣ್ಣೆ ನಗರಿ ಬೆಡಗಿ… ಅದೇನು ಗೊತ್ತಾ?

Nikita Agrawal

Leave a Comment

Share via
Copy link
Powered by Social Snap