32.3 C
Bengaluru
April 1, 2026
Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ಅಕಾಲಿಕ ಮೃತ್ಯು ತಡೆಯುವ ಕೇಂದ್ರಕ್ಕೆ ಪುನೀತ್ ಹೆಸರು

ಅಕಾಲಿಕ ಮೃತ್ಯು ತಡೆಯುವ ಸಲುವಾಗಿ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ದೀರ್ಘಾಯುಷ್ಯ ಕೇಂದ್ರವನ್ನು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಐಟಿಬಿಟಿ ಇಲಾಖೆಯ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಬೆಂಬಲದ ಮೂಲಕ ನವೋದ್ಯಮಗಳು ಅಭಿವೃದ್ಧಿ ಪಡಿಸಿರುವ 6 ಜೀವವಿಜ್ಞಾನ ಸಾಧನೆಗಳನ್ನು ಉದ್ಘಾಟಿಸಿ ಮಾತನಾಡಿದ್ದಾರೆ.

ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಮಲ, ಕಫ, ಮೂತ್ರ ಮುಂತಾದವುಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ ದೇಶದ ಮೊಟ್ಟ ಮೊದಲ ಬಯೋ ಬ್ಯಾಂಕಿಂಗ್ ಹಾಗೂ ಸಂಗ್ರಹ ಮಾದರಿ ಕೋಶವನ್ನು ಕೂಡಾ ಸ್ಥಾಪನೆ ಮಾಡಲಾಗುವುದು. ಇದರಿಂದ ರೋಗ ನಿಧಾನ ಶಾಸ್ತ್ರ ವೈಜ್ಞಾನಿಕವಾಗಿ ನಡೆಯಲಿದೆ ಎಂದು ತಿಳಿಸಿದರು.

ಪುನೀತ್ ಅವರು ಅಕಾಲಿಕ ಮರಣ ಹೊಂದಿದ ಕಾರಣ ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಅವರ ಹೆಸರನ್ನು ಇಡಲು ಸಚಿವರು ಮುಂದಾಗಿದ್ದಾರೆ.

Related posts

‘ತೊತಾಪುರಿ’ಯ ಲೋಕಾರ್ಪಣೆ ಸ್ಟಾರ್ ನಟನಿಂದ

Nikita Agrawal

ಹಿರಿತೆರೆ ಏರಿರೋ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆ ಪ್ರವೇಶ!!

Nikita Agrawal

ಗೋಲ್ಡನ್ ಗ್ಯಾಂಗ್ ಗಳ ಜೊತೆ ಜೀ ಕನ್ನಡಕ್ಕೆ ಬಂದ್ರು ಗೋಲ್ಡನ್ ಸ್ಟಾರ್

Nikita Agrawal

Leave a Comment

Share via
Copy link
Powered by Social Snap