26.2 C
Bengaluru
March 28, 2026
Karnataka Bhagya
ಹೋಮ್

ಕಲಬುರಗಿಯ ಸರ್ವಜ್ಞ ಕಾಲೇಜಿನಿಂದ ನೀಟ್‌ ಪರೀಕ್ಷೆಯಲ್ಲಿ ಅದ್ಭುತ ಸಾಧನೆ : ಮೊಹಮ್ಮದ್ ಮುಜಾಮಿಲ್ 667 ಅಂಕ ಪಡೆದು ಕಾಲೇಜಿಗೆ ಪ್ರಥಮ ಮತ್ತು ಸಂಧ್ಯಾ 651 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಮೋನಿಕಾ 647 ಅಂಕ ಪಡೆದು ತೃತೀಯ ಸ್ಥಾನ

ಕಲಬುರಗಿಯಸರ್ವಜ್ಞಕಾಲೇಜಿನಿಂದನೀಟ್ಪರೀಕ್ಷೆಯಲ್ಲಿಅದ್ಭುತಸಾಧನೆ : ಮೊಹಮ್ಮದ್ಮುಜಾಮಿಲ್667ಅಂಕಪಡೆದುಕಾಲೇಜಿಗೆಪ್ರಥಮಮತ್ತುಸಂಧ್ಯಾ651ಅಂಕಪಡೆದುದ್ವಿತೀಯಸ್ಥಾನಹಾಗೂಮೋನಿಕಾ647ಅಂಕಪಡೆದುತೃತೀಯಸ್ಥಾನ

ನೀಟ್‌ನಲ್ಲಿ12ವಿದ್ಯಾರ್ಥಿಗಳಸರ್ವಜ್ಞಕಾಲೇಜಿನ ಟಾಪರ್

ಕರ್ನಾಟಕ ಭಾಗ್ಯ ವಾರ್ತೆ

ಕಲಬುರ್ಗಿ : ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ವಿದ್ಯಾರ್ಥೀಗಳು ನೀಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. “ವೈದ್ಯಕೀಯ ಕೋರ್ಸ್ಗಳಿಗೆ ನಡೆಸುವ ರಾಷ್ಟಿçÃಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ “ನೀಟ್” ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು ಮೊಹಮ್ಮದ್ ಮುಜಾಮಿಲ್ 667 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮಸ್ಥಾನ ಪಡೆದಿದ್ದಾನೆ. ಕಾಲೇಜಿನ ಅಧಿಕ ವಿದ್ಯಾರ್ಥಿಗಳು “ನೀಟ್” ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ನೀಟ್ 2024 ರಲ್ಲಿ ಸಾಧನೆಗೈದ ಕಾಲೇಜಿನ ಟಾಪ ವಿದ್ಯಾರ್ಥಿಗಳು: ಮೊಹಮ್ಮದ್ ಮುಜಾಮಿಲ್: 667, ಸಂಧ್ಯಾ ಬಸನಗೌಡ: 651, ಮೋನಿಕಾ: 647, ಪ್ರಮೋದ್ ಕುಮಾರ: 646, ಭಾವನಾ ಚಿತ್ರಶೇಖರ ಮುಲಗೆ: 601, ಸುಮಿತ್ ನಾಮದೇವ: ೫೯೦, ರಮೇಶ್ ಅಶೋಕರೆಡ್ಡಿ: 579, ಯುವರಾಜ ಪೋಮು ರಾಠೋಡ್: 563, ಸಂತೋಷ್ ತಿರುಪತಿ: 539, ಅತುಲ್ಯಾ ಅನಿಲ: 538, ಮಿರಜಾ ಕಾಸೀಫ್ ಬೆಗ್: 536, ಬಸನಗೌಡÀ ವೆಂಕಟರೆಡ್ಡಿ: 510. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ, ಅಧ್ಯಕ್ಷರಾದ ಗೀತಾ ಪಾಟೀಲ ಮತ್ತು ಐಐಟಿ ಬಾಂಬೆಯಲ್ಲಿ ಎಮ್. ಎಸ್. ರಸಾಯನಶಾಸ್ತç ಪದÀವಿಧರರಾದ ಹಾಗೂ ಕಾಲೇಜಿನ ನಿರ್ದೇಶಕರಾದ ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ವಿನುತಾ ಆರ್.ಬಿ., ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ್, ಶಿವಶಂಕರ ಡೆರೆದ್, ಗುರುರಾಜ ಕುಲಕರ್ಣಿ ಮತ್ತು ಉಪನ್ಯಾಸಕÀರು ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.

ಬಾಕ್ಸ್

ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲರ ಆಶೀರ್ವಾದ ಮತ್ತು ಪ್ರೇರಣೆಯಿಂದ ಹಾಗೂ ಅವರು ಹೇಳಿದ ಹಾಗೆ  “ಉನ್ನತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ” ಇದ್ದರೆ ಸಾಧನೆ ಸಾಧ್ಯ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಪುನಃ ಸಾಬೀತು ಪಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೊಹಮ್ಮದ್ ಮುಜಾಮಿಲ್ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಟಾಪರ್ ಆಗಿದ್ದಾನೆ. ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ನಮ್ಮ ಕಾಲೇಜಿನಿಂದ ಡಾಕ್ಟರ್, ಇಂಜಿನಿಯರ್ ಆಗುವ ಕನಸನ್ನು ನನಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಬದಲು ಉತ್ತಮ ಯೋಜನೆ ಮಾಡಿಕೊಂಡು ಅಧ್ಯಯನ ನಡೆಸಬೇಕು ಇದಕ್ಕೆ ಪ್ರಥಮ ಪಿಯುಸಿ ದಿಂದನೆ ಪಿಸಿಎಮ್‌ಬಿ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ತಯಾರಿ ಮಾಡಲಾಗುತ್ತಿದೆ.. ಈ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮತ್ತು ಶಿಕ್ಷಕರ ಸತತ ಪ್ರಯತ್ನಕ್ಕೆ ಮತ್ತು ಯಾವತ್ತೂ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣಕ್ಕೆ ಪ್ರೇರೆಪಿಸಿ ಮತ್ತು ಪ್ರೋತ್ಸಿಹಿಸುತ್ತಿರುವ ನ್ಯಾ. ಶಿವರಾಜ ಪಾಟೀಲ ಅವರ ಆಶೀರ್ವಾದ ಹಾಗೂ ಶ್ರೇಷ್ಠ  ನುರಿತ ಉಪನ್ಯಾಸಕ ವರ್ಗದಿಂದ ಭೋಧನೆ ಇವುಗಳ ಸಂಗಮದಿAದ ಈ ಸಾಧನೆ ಸಾಧ್ಯವಾಯಿತು, ನಮ್ಮ ಭಾಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದಕ್ಕೆ ಈ ವಿದ್ಯಾರ್ಥಿಗಳೆ ಸಾಕ್ಷಿ… –     ಪ್ರೊ. ಚನ್ನಾರಡ್ಡಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು

ಬಾಕ್ಸ್

ಜೆ.ಇ.ಇ. ಮೇನ್ಸ್ ಹಾಗೂ ಸಿ.ಇ.ಟಿ ಪರೀಕ್ಷೆಗೆ ತಯಾರಿ ಮಾಡುವ ಗುರಿಯನ್ನು ಇಟ್ಟುಕೊಂಡು ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಅವರ ಭೌತಶಾಸ್ತç ಮತ್ತು ರಸಾಯನಶಾಸ್ತç ಬೋಧನೆಗಾಗಿ ಮತ್ತು  ಅವರ ಮಾರ್ಗದರ್ಶನಕ್ಕಾಗಿ ಹಾಗೂ ಪ್ರತಿಭಾನ್ವಿತ ನುರಿತ ಶಿಕ್ಷPರು ಸರ್ವಜ್ಞ ಕಾಲೇಜಿನಲ್ಲಿ ಲಭ್ಯ ವಿರುವದರಿಂದ ನಾನು ಸರ್ವಜ್ಞ ಕಾಲೇಜು ಸೇರಿದೆ. ಇಲ್ಲಿ ನನಗೆ ಅತ್ಯುತ್ತಮ ತರಬೇತಿ ನೀಡಿದ ಪರಿಣಾಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ವಿಧಾನದಿಂದ ಹಾಗೂ ಚನ್ನರೆಡ್ಡಿ ಪಾಟೀಲರ ಯೋಜನೆ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ತಂದೆ-ತಾಯಿಯ ಸಹಕಾರ ಹಾಗೂ ನನ್ನ ನಿರಂತರ ಪರಿಶ್ರಮಕ್ಕೆ ಇದೊಂದು ಉತ್ತಮ ಸಾಧನೆ, ತುಂಬ ಖುಷಿಯಾಗುತ್ತಿದೆ”   –     ಮೊಹಮ್ಮದ್ ಮುಜಾಮಿಲ್ ಟಾಪರ್ ವಿದ್ಯಾರ್ಥಿ                             

ಕಲಬುರಗಿಯಸರ್ವಜ್ಞಕಾಲೇಜಿನಿಂದನೀಟ್ಪರೀಕ್ಷೆಯಲ್ಲಿಅದ್ಭುತಸಾಧನೆ : ಮೊಹಮ್ಮದ್ಮುಜಾಮಿಲ್667ಅಂಕಪಡೆದುಕಾಲೇಜಿಗೆಪ್ರಥಮಮತ್ತುಸಂಧ್ಯಾ651ಅಂಕಪಡೆದುದ್ವಿತೀಯಸ್ಥಾನಹಾಗೂಮೋನಿಕಾ647ಅಂಕಪಡೆದುತೃತೀಯಸ್ಥಾನ

Related posts

ಬಂದಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ೨೦೨೪ ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಚಾಲನೆ

Mahesh Kalal

ಯಾದಗಿರಿ ಬಸವ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಜಗಜ್ಯೋತಿ ಬಸವೇಶ್ವರ ಮೂರ್ತಿಯ ಬೃಹತ್ ಮೆರವಣಿಗೆ

Mahesh Kalal

ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್

Mahesh Kalal

Leave a Comment

Share via
Copy link
Powered by Social Snap