September 14, 2026
Karnataka Bhagya
ಇತರೆ

ಮಲ್ಲಯ್ಯನ ಮೂರ್ತಿ ಕಿತ್ತಿ ನಿಧಿ ಹುಡುಕಾಟ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ನಿಧಿಗಾಗಿ ದೇವರ ಕಲ್ಲಿನ ಮೂರ್ತಿ ಕಿತ್ತು ಹಾಕಿ ತೆಗ್ಗು ಗುಂಡಿ ಅಗೆದು ನಿಧಿ ಹುಡುಕಾಡಿದ ಘಟನೆ ವಡಗೇರಾ ತಾಲೂಕಿನ ಗೋಡಿಹಾಳ ಬಳಿ ನಡೆದಿದೆ.

ಗೋಡಿಹಾಳ ಹೋಗುವ ಮಾರ್ಗದಲ್ಲಿರುವ ಶಿಬರ ಮಲ್ಲಯ್ಯನ ದೇವಸ್ಥಾನ ಅಗೆದ ನಿಧಿಗಳ್ಳರು ಮೂರ್ತಿಗಳನ್ನು ಕಿತ್ತಿ ಅಲ್ಲಲ್ಲಿ ಹೊಗೆದು, ಅಲ್ಲಿರುವ ಮರಗಳನ್ನು ಕೂಡ ಕಡಿದು ಹಾಕಿದ ಘಟನೆ ನಡೆದಿದ್ದು, ಇಲ್ಲಿ ನೂರಾರು ವರ್ಷ ಹಳೆಯ ಕಾಲದ ಹಳೆಯ ಶಿಲಾಮೂರ್ತಿಗಳಿವೆ. ಶಿಬಿರ ಮಲ್ಲಯ್ಯನ ದೇವರ ಮೂರ್ತಿ ಎಂದು ಗುರುತಿಸಿದ್ದ ಕಲ್ಲಿನ ಮೂರ್ತಿಯನ್ನು ಕಿತ್ತು ಹಾಕಿ ಅದರ ಕೆಳ ಭಾಗದ ಭೂಮಿಯನ್ನು ಅಗೆದು ತೆಗ್ಗು ಮಾಡಿ ನಿಧಿಗಾಗಿ ಹುಡುಕಾಟ ನಡೆಸಲಾಗಿದೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ಪತ್ತೆಯಾಗಬೇಕಿದೆ.

ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಗ್ರಾಮಸ್ಥರು ನಿಧಿಗಳ್ಳರ ಪತ್ತೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Related posts

ಕೊನೆಗೂ ಒಟಿಟಿ ಕಡೆಗೆ ಹೆಜ್ಜೆ ಹಾಕಿದ ‘ಸಲಗ’.

Nikita Agrawal

ಬಿಜೆಪಿಯಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ : ಗುತ್ತೇದಾರ

Mahesh Kalal

ಹೋದ್ರೆ ಹೋಗ್ಲಿ ಬಿಡಿ ಹಾಡಿನ ಮೂಲಕ ಮತ್ತೆ ಎಂಟ್ರಿ ಕೊಟ್ಟ ಬ್ರೋ ಗೌಡ

Nikita Agrawal

Leave a Comment

Share via
Copy link
Powered by Social Snap