Karnataka Bhagya
ರಾಜಕೀಯ

ಕಲ್ಯಾಣ ಕರ್ನಾಟಕ ಉತ್ಸವ, ಪ್ರಧಾನಿ ಮೋದಿ ಜನುದಿನ ಸಂಭ್ರಮದ ಆಚರಣೆಗೆ ಕೋರ ಕಮೀಟಿ ನಿರ್ಣಯ.

ಸೆ. ೨೩ ರಂದು ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ

ಕಲ್ಯಾಣ ಕರ್ನಾಟಕ ಉತ್ಸವ, ಪ್ರಧಾನಿ ಮೋದಿ ಜನುದಿನ ಸಂಭ್ರಮದ ಆಚರಣೆಗೆ ಕೋರ ಕಮೀಟಿ ನಿರ್ಣಯ.

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದ್ದು, ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಮತ್ತಷ್ಟು ಸಂಘಟನೆ ಬಲಿಷ್ಟವಾಗಿ ಕಟ್ಟಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದ ಸಪ್ತಪದಿ ಹೊಟೇಲ್‌ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು,
ಪಕ್ಷ ಸಂಘಟನೆಯ ಜೊತೆಗೆ ಪಕ್ಷದ ಸೂಚನೆಯಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂದು ಹೇಳಿದರು.
ಹಾಲಿ ರಾಜ್ಯ ಸರ್ಕಾರದ ವೈಫಲ್ಯಗಳು ಸಾಕಷ್ಟಿದ್ದು ಅವುಗಳನ್ನು ಪರಿಣಾಮಕಾರಿಯಾಗಿ ಜನರ ಮುಂದೆ ಇಡಲು ಎಲ್ಲರೂ ಶ್ರಮವಹಿಸಬೇಕಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಲೋಕಸಭೆ ಚುನಾವಣೆ ೬ ತಿಂಗಳು ಇರುವುದರಿಂದ ತಯಾರಿ ಮಾಡಿಕೊಳ್ಳಲು ಚರ್ಚಿಸಲಾಯಿತು. ಕೇಂದ್ರದ ವಿವಿಧ ಯೋಜನೆಗಳ ಪ್ರಚಾರ ಮಾಡುವಂತೆ ಸಲಹೆ ಸೂಚನೆ ನೀಡಿದರು.
ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಥಮ, ದ್ವಿತಿಯ ಶ್ರೇಣಿ ನಾಯಕರನ್ನು ಬಳಸಿಕೊಂಡು ಪಕ್ಷ ಸಂಘಟನೆಯ ಜೊತೆಗೆ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನ ಆಚರಣೆಯನ್ನು ಸಂಭ್ರಮದಿAದ ಆಚರಿಸಲು ಶ್ರಮಿಸಬೇಕಿದೆ ಎಂದು ಹೇಳಿದರು.
ಪಕ್ಷ ಸಂಘಟನೆಗಾಗಿ ಇದೇ ಸೆ. ೨೩ ರಂದು ಜಿಲ್ಲಾ ಮಟ್ಟದ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಮತದಾರರ ಪಟ್ಟಿ ಪರಿಷ್ಕರಣೆ, ಸೇರ್ಪಡೆ ಕಾರ್ಯಕ್ರಮದಲ್ಲಿಯೂ ಕಾರ್ಯಕರ್ತರು ಸಕ್ರಿಯವಾಗಿ ಭಾಗಿಯಾಗಬೇಕು ಅರ್ಹ ಮತದಾರರ ಸೇರ್ಪಡೆ ಕಾರ್ಯಕ್ಕೆ ಕೈಜೋಡಿಸಬೇಕೆಂದು ತಿಳಿಸಲಾಯಿತು.
ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನ ಆಚರಣೆಯನ್ನು ಸಂಭ್ರಮದಿAದ ಆಚರಿಸಲು ಬಿಜೆಪಿ ಜಿಲ್ಲಾ ಕೋರ್ ಕಮೀಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಭಾರಿ ಅಮರನಾಥ ಪಾಟೀಲ್,ಸುಬ್ಬನರಸಿಂವ, ವೆಂಕಟಪ್ರಸಾದ ಮಾಲಿಪಾಟಿ, ಅರುಣ ಬಿನ್ನಾಡಿ,ನಾಗರತ್ನ ಕುಪ್ಪಿ,ಕು ಲಲಿತಾ ಅನಂತಪುರ,ದೆವಿAದ್ರನಾಥ ನಾದ,ಗುರು ಕಾಮ ಇದ್ದರು.

Related posts

ಟಾಲಿವುಡ್ ಮಂದಿಯ ಮುಂದೆ ನಡೆಯಲಿದೆ ಅಪ್ಪು ಅಭಿಮಾನಿಗಳ ಶೌರ್ಯ ಪ್ರದರ್ಶನ

Nikita Agrawal

ಹುಟ್ಟುಹಬ್ಬದ ದಿನ ಅಪ್ಪು ನೆನೆದು ಭಾವುಕರಾದ ಅನುಶ್ರೀ

Nikita Agrawal

ತಾಯಿಯ ಮಡಿಲು ಸ್ವರ್ಗ ಎಂದ ಸಲ್ಮಾನ್ ಖಾನ್

Nikita Agrawal

Leave a Comment

Share via
Copy link
Powered by Social Snap