Karnataka Bhagya
ಕರ್ನಾಟಕ

ಗುರುಮಠಕಲ್ ಪಟ್ಟಣದ ಶ್ರೀ ಕೊಡ್ಲಿಮಠದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಪ್ರಯುಕ್ತ ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮ

ಪಟ್ಟಣದ ಶ್ರೀ ಕೊಡ್ಲಿಮಠದಲ್ಲಿ ಬೆಳಿಗ್ಗೆ 8 ಘಂಟೆಯಿಂದ ಶ್ರೀ ರೇಣುಕಾಚಾರ್ಯ ಜಯಂತಿ ಪ್ರಯುಕ್ತ ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಮಠದಲ್ಲಿ ಹಿಂದೆ ತ್ರಿಕಾಲ ಪೂಜೆ ಜರುಗುತ್ತಿದ್ದವು, ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಪೂಜೆಯನ್ನು ವೀರಶೈವ ಧರ್ಮ ಸಂಸ್ಥಾಪಕ ಶ್ರೀ ರೇಣುಕಾಚಾರ್ಯರ ಜಯಂತಿಯಂದು ಮತ್ತೆ  ಘಂಟಾನಾದ, ಮಂತ್ರಾಗೋಷಗಳಿಂದ ಝೆಂಕರಿಸುತ್ತಿರುವುದು ಮನಸ್ಸಿಗೆ ಹಿತ ತಂದಿದೆ, ಇತಿಹಾಸವುಳ್ಳ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಮಾಜ ಇಂದು ಶ್ರಮವಹಿಸಿಬೇಕಾಗಿದೆ ಎಂದು ಅವರು ಹೇಳಿದರು.

ಆನಂದ ಬೂದಿ ಮಾತನಾಡಿ, 2024 ತುಂಬಾ ವಿಶೇಷ ವರ್ಷವಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ವಿಸ್ಮಯಗಳೇ ನಡೆಯುತ್ತಿವೆ,ಅಯೋಧ್ಯೇಯಲ್ಲಿ ಶ್ರೀ ರಾಮಲಲ್ಲನ ವಿರಾಜಮಾನ, ಕೊಡ್ಲಿಮಠದಲ್ಲಿ ರುದ್ರಪಾರಾಯಣ ನೋಡುತ್ತಿರುವುದೇ ನಮ್ಮ ಸೌಭಾಗ್ಯ. ಧರ್ಮ ಜಾಗೃತಿಯಗಲು ಇಂದಿನ ಯುವ ಪೀಳಿಗೆ ಸಂಘಟನೆಗೊಳ್ಳಬೇಕಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ವೀರಶೈವ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Related posts

“ನವ ದುರ್ಗೆಯರ ಆರಾಧನೆಯ ದಸರಾ ಹಬ್ಬ”

Mahesh Kalal

ಕಿರುತೆರೆಯಿಂದ ಹಿರಿತೆರೆಗೆ ಎಡವಟ್ ರಾಣಿ ಪಯಣ

Nikita Agrawal

ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಡಗಿನ ಕುವರಿ

Nikita Agrawal

Leave a Comment

Share via
Copy link
Powered by Social Snap