21.4 C
Bengaluru
August 16, 2026
Karnataka Bhagya
Blogಕ್ರೀಡೆ

ನಂ.1 ವಾಹಿನಿಯ ನಂ.1 ಸೀರಿಯಲ್

ಜೀ ಕನ್ನಡ ವಿನೂತನ ಕಾರ್ಯಕ್ರಮಗಳ ಮೂಲಕ ಮನರಂಜಿಸುತ್ತ ನಂಬರ್ 1 ಸ್ಥಾನದಲ್ಲಿ ಮುನ್ನುಗುತ್ತಿರುವ ಕನ್ನಡಿಗರ ಹೆಮ್ಮೆಯ ವಾಹಿನಿ. ಇದರಲ್ಲಿ ಬರುವ “ಜೊತೆಜೊತೆಯಲಿ ” ಕನ್ನಡ ಕಿರುತೆರೆಗೆ ಶ್ರೀಮಂತಿಕೆಯನ್ನು ಪರಿಚಯಿಸಿದ ಧಾರಾವಾಹಿ. ವಿಭಿನ್ನ ಬಗೆಯ ಕಥೆಯ ಮೂಲಕ ಆರಂಭದಿಂದಲೇ ವೀಕ್ಷಕರ ಗಮನ ಸೆಳೆದದ್ದು ಇದರ ಹೆಗ್ಗಳಿಕೆ. ಸೀರಿಯಲ್ ನೇ ಸಿನಿಮಾ ಶೈಲಿಯಲ್ಲಿ ನಿರೂಪಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ ಮೊದಲ ಧಾರಾವಾಹಿ. ನಂಬಿಕೆ ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ ಈ ಕಥೆ ಹಲವಾರು ರೋಚಕ , ಮನಮೋಹಕ ಸನ್ನಿವೇಶಗಳೊಂದಿಗೆ 650 ಸಂಚಿಕೆಗಳತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ.
ಆರ್ಯವರ್ಧನ್ ,ಅನು ಸಿರಿಮನೆ , ಪುಷ್ಪ , ಸುಬ್ಬು , ಝೇಂಡೆ ಹೀಗೆ ಇಲ್ಲಿ ಬರುವ ಎಲ್ಲಾ ಪಾತ್ರಗಳು ತನ್ನದೇ ಆದ ಮಹತ್ವ ಪಡೆದುಕೊಂಡು ಅನೇಕ ತಿರುವುಗಳಿಗೆ ಸಾಕ್ಷಿಯಾಗಿದೆ ಮತ್ತು ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದೆ.
ರಾಜನಂದಿನಿ ರಹಸ್ಯ , ಸಂಕ್ರಾಂತಿ ಸಂಭ್ರಮ , ಮದುವೆ ಸಡಗರ , ಸೀಕ್ರೆಟ್ ರೂಮ್ ಅನಾವರಣ ಹೀಗೆ ಅನೇಕ ವಿಶೇಷ , ಕುತೂಹಲಕಾರಿ ಸಂಚಿಕೆಗಳೊಂದಿಗೆ ಜನಪ್ರಿಯಗೊಂಡಿದ್ದ ಈ ಧಾರಾವಾಹಿ ಇದೀಗ ” ರಾಜನಂದಿನಿ ಅಧ್ಯಾಯ ” ದ ಹೊಸ ಲೋಕಕ್ಕೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿದೆ.
ತನ್ನ ಸುತ್ತ ಸುಳ್ಳಿನ ಕೋಟೆಯನ್ನ ಕಟ್ಟಿಕೊಂಡಿರುವ ಆರ್ಯವರ್ಧನ್ ಮುಖವಾಡಗಳು ಒಂದೊಂದೇ ಕಳಚಿ ಬೀಳುವಾಗ ಅವರು ಅದರಿಂದ ಪಾರಾಗುವ ರೀತಿ, ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಉಳಿದ ಪಾತ್ರಗಳನ್ನು ಆಡಿಸುವ ಬಗೆ ಎಲ್ಲವೂ ಜನರನ್ನು ಆಕರ್ಷಿಸಿವೆ .
ಈ ರಾಜನಂದಿನಿಯ ಹೊಸ ಅಧ್ಯಾಯದಲ್ಲಿ ಸುಭಾಷ್ ಪಾಟೀಲ್ ಎಂಬ ಪಾತ್ರವೊಂದು ಜೀವಪಡೆದುಕೊಂಡಿದ್ದು ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸುಭಾಷ್ ಪಾಟೀಲ್ ಯಾರು ? ಅವರಿಗೂ ರಾಜನಂದಿನಿಗೂ ಇರುವ ಸಂಬಂಧವೇನು ? ಈ ಸುಭಾಷ್ ಪಾಟೀಲ್ ಪಾತ್ರ ಅನು ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ? ಹೀಗೆ ಹತ್ತುಹಲವು ನಿಗೂಢತೆಗಳನ್ನೇ ಕಥೆಯುದ್ದಕ್ಕೂ ಹೊತ್ತು ತರುತ್ತಿದೆ ಜೊತೆಜೊತೆಯಲಿ. ಅಷ್ಟೇ ಅಲ್ಲದೇ ವೀಕ್ಷಕರ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆ ಮೂಡುವ ಹಾಗೆ ಮಾಡಿದೆ.

Related posts

ಅಪ್ಪು ನೆನಪಿನಲ್ಲಿ ಕರುನಾಡ ರತ್ನ. ಕಾರ್ಯಕ್ರಮ

Nikita Agrawal

ಬೌನ್ಸರ್ ಆಗಿ ರಂಜಿಸಲು ತಯಾರಾಗಿದ್ದಾರೆ ಮಿಲ್ಕಿ ಬ್ಯೂಟಿ

Nikita Agrawal

ಸೂಪರ್ ವುಮೆನ್ ಅವತಾರದಲ್ಲಿ ಬಾಲಿವುಡ್ ಬೆಡಗಿ

Nikita Agrawal

Leave a Comment

Share via
Copy link
Powered by Social Snap