August 14, 2026
Karnataka Bhagya
Blogಲೈಫ್ ಸ್ಟೈಲ್

ಅಮೂಲ್ಯ ಮನೆಗೆ ಮಗು ಆರೈಕೆಗೆಗಾಗಿ ಮನೆಗೆ ಬಂದ ಗಂಗೆ ದ್ರೌಪದಿ

ನಟಿ ಅಮೂಲ್ಯ ತುಂಬು ಗರ್ಭಿಣಿ… ಇನ್ನು ಕೆಲವೇ‌ ದಿನಗಳಲ್ಲಿ ಮುದ್ದು ಮಗು ಅಮೂಲ್ಯ ಮಡಿಲು ಸೇರಲಿದೆ… ಇದೇ ಸಂತಸದಲ್ಲಿರುವ ಅಮೂಲ್ಯ ಮನೆಗೆ ಸಂಕ್ರಾಂತಿ ಹಬ್ಬದಂದು ಗಂಗೆ ಹಾಗೂ ದ್ರೌಪದಿ ಅವರ ಮಗು ಹಾಗೂ ಅಮೂಲ್ಯ ಅವರ ಆರೈಕೆ ಮಾಡಲು ಬಂದಿದ್ದಾರೆ …

ಹೌದು ತುಂಬು ಗರ್ಭಿಣಿ ಆಗಿರುವಂತಹ ಅಮೂಲ್ಯಗೆ ಸದ್ಯ ಉತ್ತಮ ಆಹಾರ ಬೇಕಾಗುತ್ತದೆ.. ಆದ ಕಾರಣದಿಂದ ಅಮೂಲ್ಯ ಪತಿ ಜಗದೀಶ್ ತಮ್ಮ ಮನೆಗೆ ಹಸು ಹಾಗೂ ಕರು ಕರುವನ್ನು ಕರೆತಂದಿದ್ದಾರೆ… ಸಂಕ್ರಾಂತಿ ಹಬ್ಬದಂದು ಗಂಗೆ ಹಾಗೂ ದ್ರೌಪದಿ ಹೆಸರಿನ ಹಸು ಕರುವನ್ನು ಮನೆಗೆ ಕರೆತಂದಿದ್ದು ಗೋಮಾತೆಯನ್ನು ಹಬ್ಬದ ದಿನದಂದೇ ಪೂಜೆ ಮಾಡಿ ಸಂತಸದಿಂದ ಮನೆ ತುಂಬಿಸಿಕೊಂಡಿದ್ದಾರೆ …

ಇದೇ ರೀತಿಯಲ್ಲಿ ನಿಕಿಲ್ ಪತ್ನಿ ರೇವತಿ ಕೂಡ ಗರ್ಭವತಿಯಾದಾಗ ಕುಮರಸ್ವಾಮಿಯವರು ಎರಡು‌ ಗಿಡ್ಡ ಹಸುಗಳನ್ನ ತಮ್ಮ ಮನೆಗೆ ಕರೆತಂದಿದ್ದರು ..ಗರ್ಭಿಣಿ ಸಮಯದಲ್ಲಿ ನಾಟಿ ಹಸುವಿನ ಹಾಲು ಸೇವಿಸುವುದರಿಂದ ಹೆಚ್ಚಿನ ಪೋಷಕಾಂಶ ದೇಹಕ್ಕೆ ಸೇರುತ್ತದೆ ಇದರಿಂದ ಮಗು ಕೂಡ ಆರೋಗ್ಯವಾಗಿರುತ್ತದೆ ಆದ್ದರಿಂದ ಈಗ ಸಿನಿಮಾ ಸ್ಟಾರ್ ಗಳು ಗರ್ಭಿಣಿಯರಾದಾಗ ಮನೆಗೆ ಹಸುಗಳನ್ನು ತಂದು ಸಾಕಿ ಅವುಗಳ ಹಾಲನ್ನು ಸೇವಿಸಲು ಆರಂಭಿಸಿದ್ದಾರೆ …

Related posts

‘ಎದ್ದೇಳು ಮಂಜುನಾಥ 2’

Nikita Agrawal

ಮುಂದಿನ‌ ಸಿನಿಮಾ ಬಗ್ಗೆ ಕ್ಲೂ ಕೊಟ್ಟ ರಾಕಿಭಾಯ್,ಸದ್ಯದಲ್ಲೇ ಮಾಸ್ ಸಿನಿಮಾ ಹೆಸರು ಅನೌನ್ಸ್..!

kartik

ಪುನೀತ್ ಫೋಟೋ ಹಿಡಿದು ಶಭರಿ ಮಲೆ‌ ಯಾತ್ರೆ ಮಾಡಿದ ಅಭಿಮಾ‌ನಿ..

Karnatakabhagya

Leave a Comment

Share via
Copy link
Powered by Social Snap