Karnataka Bhagya
Blogಕ್ರೀಡೆ

‘ಶಕ್ತಿಧಾಮ’ದಲ್ಲೊಂದು ಶಾಲೆ; ನನಸಾಗಲಿದೆ ಅಪ್ಪು ಕನಸು.

ರಾಜ್ ಕುಟುಂಬ ಸಮಾಜಸೇವಾ ಕಾರ್ಯಗಳಿಗೆ ಹೆಸರುವಾಸಿ. ಈ ಕುಟುಂಬದ ಪ್ರತಿಯೊಂದು ಕುಡಿಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ಕೊಡುತ್ತಾ ಬಂದಿದ್ದಾರೆ. ಇವರ ಸಮಾಜಸ್ನೇಹಿ ಕೆಲಸಗಳಲ್ಲೊಂದು ಮೈಸೂರಿನಲ್ಲಿರುವ ‘ಶಕ್ತಿಧಾಮ’. ಸುಮಾರು 24 ವರ್ಷಗಳ ಸುದೀರ್ಘ ಇತಿಹಾಸ ಇರೋ ಈ ಶಕ್ತಿಧಾಮ ಬಡ ಹೆಣ್ಣುಮಕ್ಕಳಿಗೆ ವಸತಿ, ಊಟಗಳನ್ನು ಉಚಿತವಾಗಿ ನೀಡುತ್ತಿದೆ. ಇದೊಂದು ಮಹಿಳಾ ಪುನರ್ವಸತಿ ಹಾಗು ಅಭಿವೃದ್ಧಿ ಕೇಂದ್ರ ಎನ್ನಬಹುದು. ಶೀಘ್ರದಲ್ಲೇ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣವಾಗಲಿದೆಯಂತೆ.

1998ರಲ್ಲಿ ನಿರ್ಮಿತವಾಗಿ, 2000ನೇ ಇಸವಿಯಲ್ಲಿ ಕಾರ್ಯೋನ್ಮುಖವಾದ ಈ ‘ಶಕ್ತಿಧಾಮ’ ಇಲ್ಲಿಯವರೆಗೆ ಸುಮಾರು 4000 ವಿದ್ಯಾರ್ಥಿನಿಯರ ಬದುಕಿಗೆ ಬೆಳಕಾಗಿದೆ. ಪ್ರಸ್ತುತ ಸುಮಾರು 150 ವಿದ್ಯಾರ್ಥಿನಿಯರಿರುವ ಈ ‘ಶಕ್ತಿಧಾಮ’ದಲ್ಲಿ ಶಾಲೆಯೊಂದನ್ನ ಕಟ್ಟಬೇಕೆಂಬುದು ಪುನೀತ್ ರಾಜಕುಮಾರ್ ಅವರ ಆಸೆಯಾಗಿತ್ತಂತೆ. ಶೀಘ್ರದಲ್ಲೇ ಈ ಕನಸು ಸರ್ಕಾರದ ಅನುದಾನದೊಂದಿಗೆ ನನಸಾಗಲಿದೆ. ಇತ್ತೀಚಿನ ಬಜೆಟ್ ಒಂದರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಕ್ತಿಧಾಮದಲ್ಲಿ ಶಾಲೆಯೊಂದನ್ನು ಕಟ್ಟಲು ಅನುದಾನವನ್ನು ಮೀಸಲಿಡುವುದಾಗಿ ಹೇಳಿದ್ದಾರೆ. ಈ ನಿರ್ಧಾರ ರಾಜ್ ಕುಟುಂಬಕ್ಕೆ ಸಂತಸ ತಂದಿದೆ.

ರಾಜಕುಮಾರ್ ಹಾಗು ಪಾರ್ವತಮ್ಮ ರಾಜಕುಮಾರ್ ದಂಪತಿಗಳು ಕಟ್ಟಿದ ಈ ‘ಶಕ್ತಿಧಾಮ’ವನ್ನು ನಿಧಾನರಾಗುವವರೆಗೆ ಪಾರ್ವತಮ್ಮ ಮುಂದಾಳತ್ವದಲ್ಲಿ ನೋಡಿಕೊಳ್ಳುತ್ತಿದರಂತೆ. ಪಾರ್ವತಮ್ಮ ನಮ್ಮನ್ನಗಲಿದ ನಂತರ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ನಡೆಸಿಕೊಂಡು ಬಂದರು. ಕುಟುಂಬದ ಪ್ರತಿಯೊಬ್ಬರೂ ಸಹ ತಮ್ಮ ಸಂಪಾದನೆಯಲ್ಲೊಂದು ಪಾಲನ್ನು ಇದಕ್ಕಾಗಿ ಮೀಸಲಿಡುತ್ತಿದ್ದರು. ಅಪ್ಪು ಹಲವಾರು ಬಾರಿ ಈ ಶಕ್ತಿಧಾಮಕ್ಕೆ ಧನಸಹಾಯ ಮಾಡಿದ್ದರಂತೆ. ಶಿವಣ್ಣ ಒಮ್ಮೊಮ್ಮೆ ‘ಶಕ್ತಿಧಾಮ’ಕ್ಕೆ ಭೇಟಿಕೊಟ್ಟು ಮಕ್ಕಳೊಂದಿಗೆ ಆಡುತ್ತಿದರು, ಮಕ್ಕಳನ್ನ ಶೂಟಿಂಗ್ ಸ್ಥಳಕ್ಕೆ ಸಹ ಕರೆದೊಯ್ಯುತ್ತಿದರು. ಸದ್ಯ ಇಲ್ಲೊಂದು ಶಾಲೆಯಾದರೆ ಹಲವಾರು ಬಡವಿದ್ಯಾರ್ಥಿನಿಯರಿಗೆ ಅತೀವ ಸಹಾಯವಾಗಲಿದೆ.

Related posts

ಜೊತೆಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಯಾಗಿ ಕಾಣಿಸಿಕೊಳ್ಳಲಿರುವ ನಟಿ ಇವರೇ ನೋಡಿ

Nikita Agrawal

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..!

Karnatakabhagya

ರಗಡ್ ಅವತಾರದಲ್ಲಿ ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ದೀಕ್ಷಿತ್ ಶೆಟ್ಟಿ

Nikita Agrawal

Leave a Comment

Share via
Copy link
Powered by Social Snap