September 14, 2026
Karnataka Bhagya
Blogಇತರೆ

ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕಥೆಯನ್ನ ಆಧಾರವಾಗಿಟ್ಟುಕೊಂಡು ಮಾಡಿದಂತಹ ಚಿತ್ರ ‘ಮೇಜರ್’. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದಾಗ ವೀರಮರಣವನ್ನಪ್ಪಿ ’26/11ರ ಹೀರೋ’ ಎಂದೇ ಭಾರತೀಯರ ಮನದಲ್ಲಿ ಉಳಿದುಕೊಂಡವರು ಸಂದೀಪ್ ಉನ್ನಿಕೃಷ್ಣನ್. ಆ ದಿನದ ಘಟನೆಯನ್ನಷ್ಟೇ ಅಲ್ಲದೇ ಅವರ ಜೀವನದ ಮುಖ್ಯ ಅಂಶಗಳನ್ನೆಲ್ಲ ಸೇರಿಸಿಕೊಂಡು ಮಾಡಿದ ಈ ಸಿನಿಮಾ ಇದೇ ಜೂನ್ 3ರಂದು ಚಿತ್ರಮಂದಿರಗಳ ಮೆಟ್ಟಿಲೇರಿತ್ತು. ಭಾರತದಾದ್ಯಂತ ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲರ ಮನಸಲ್ಲೂ ಒಮ್ಮೆಗೆ ಹೆಮ್ಮೆಯ ಭಾವ ತುಂಬುವಲ್ಲಿ ಯಶಸ್ವಿಯಾಗಿತ್ತು.ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತ ಸಿನಿಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದ್ದ ಈ ಸಿನಿಮಾ ಇದೀಗ ಒಟಿಟಿ ಕಡೆಗೆ ಹೆಜ್ಜೆ ಹಾಕುತ್ತಿದೆ.

ತೆಲುಗಿನ ಹೆಸರಾಂತ ನಟ ಹಾಗು ಕಥೆಗಾರ ಅದಿವಿ ಸೇಶ್ ಅವರು ನಾಯಕನಟನಾಗಿ ನಟಿಸಿರುವ ಈ ಸಿನಿಮಾದ ಚಿತ್ರಕತೆ ಹೆಣೆಯುವಲ್ಲೂ ಸಹ ಅದಿವಿ ಸೇಶ್ ಅವರೇ ಮುಖ್ಯ ಪಾತ್ರ ವಹಿಸಿದ್ದಾರೆ. ಶಶಿ ಕಿರಣ್ ಟಿಕ್ಕ ಅವರು ನಿರ್ದೇಶಿಸಿರುವ ಈ ಸಿನಿಮಾವನ್ನು ಟೋಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಇದೇ ಜುಲೈ 3ರಿಂದ ನೆಟ್ ಫ್ಲಿಕ್ಸ್(NETFLIX) ನಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನ ಜೊತೆಯಲ್ಲೇ ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲೂ ಪ್ರದರ್ಶನ ಕಾಣಲಿರೋ ಈ ಚಿತ್ರವನ್ನ ಚಿತ್ರಮಂದಿರಗಳಲ್ಲಿ ನೋಡದಿರುವವರು NETFLIX ನಲ್ಲಿ ನೋಡಬಹುದಾಗಿದೆ.

Related posts

ಸ್ಯಾಂಡಲ್ ವುಡ್ ಮೂಲಕ ಮತ್ತೆ ನಟನೆಗೆ ಹಾಜರ್ ಭರತ್ ಬೋಪಣ್ಣ

Nikita Agrawal

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ

Nikita Agrawal

ಖಾತ್ರಿಯಾಯ್ತು ಶಿವಣ್ಣನ ಮುಂದಿನ ಸಿನಿಮಾ.

Nikita Agrawal

Leave a Comment

Share via
Copy link
Powered by Social Snap