Karnataka Bhagya
Blogಕಲೆ/ಸಾಹಿತ್ಯ

‘ಉಗ್ರಂ’ – ‘ಸಲಾರ್’ ವಾರ್

ಪಾನ್-ಇಂಡಿಯನ್ ನಿರ್ದೇಶಕ, ಕನ್ನಡಿಗ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ ಚಾಪ್ಟರ್ 2ರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕೆಜಿಎಫ್ ಚಾಪ್ಟರ್ 1 ರಿಂದ ಭಾರತದಾದ್ಯಂತ ಪ್ರಖ್ಯಾತರಾದ ನೀಲ್, ತಮ್ಮ ಮುಂದಿನ ಚಿತ್ರವನ್ನ ಟೋಲಿವುಡ್ ನ ಪಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರಿಗೆ ನಿರ್ದೇಶಿಸುತ್ತಿರಿವುದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಈ ಚಿತ್ರದ ಬಗೆಗಿನ ಗುಸುಗಸುವೊಂದಕ್ಕೆ ನೀಲ್ ತೆರೆ ಎಳೆದಿದ್ದಾರೆ.

‘ಸಲಾರ್’ ಮುಂದೆ ಬರಲಿರೋ ಚಿತ್ರಗಳ ಸಾಲಿನಲ್ಲಿರೋ ಅತ್ಯಂತ ನಿರೀಕ್ಷಿತ ಪಾನ್ ಇಂಡಿಯನ್ ಚಿತ್ರ ಎಂದರೆ ತಪ್ಪಿಲ್ಲ. ‘ಹೊಂಬಾಳೆ ಫಿಲಂಸ್’ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾ ಸೇಟ್ಟೆರಿದಾಗಿನಿಂದ ಗಾಳಿಸುದ್ದಿಯೊಂದು ಎಲ್ಲರ ಮನಕೆಡಿಸಿತ್ತು. ‘ಉಗ್ರಂ’ ಚಿತ್ರದ ಕಥೆಯೇ ‘ಸಲಾರ್’ ಸಿನಿಮಾದಲ್ಲೂ ಇರಲಿದೆ, ‘ಸಲಾರ್’ ಉಗ್ರಂ ಸಿನಿಮಾದ ಪಾನ್ ಇಂಡಿಯನ್ ಅವತರಣಿಕೆ ಅಷ್ಟೇ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಒಂದಷ್ಟು ವರ್ಗದವರಿಗೆ ಈ ವಿಷಯ ನಿರಾಸೆ ತಂದಿದ್ದರೂ, ಒಂದಷ್ಟು ಜನರನ್ನು ಚಕಿತಗೊಳಿಸಿತ್ತು. ಆದರೀಗ ಪ್ರಶಾಂತ್ ನೀಲ್ ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಕೆಜಿಎಫ್ ಚಾಪ್ಟರ್ 2ರ ಪ್ರಚಾರದಲ್ಲಿ ಭಾರತದಾದ್ಯಂತ ಚಿತ್ರತಂಡ ಮೆರವಣಿಗೆ ಹೋಗುತ್ತಿದೆ. ಈ ಸಂದರ್ಭದ ಸುದ್ದಿಗೋಷ್ಠಿಯೊಂದರಲ್ಲಿ ಪ್ರಶಾಂತ್ ನೀಲ್ ಅವರಿಗೆ ‘ಸಲಾರ್’ ಬಗೆಗಿನ ಪ್ರಶ್ನೆಯೊಂದನ್ನ ಕೇಳಲಾಯ್ತು. ಉತ್ತರಿಸುತ್ತ ಪ್ರಶಾಂತ್ ನೀಲ್, “ಉಗ್ರಂ ನನ್ನ ಮೊದಲ ಚಿತ್ರ. ನಾನು ಮುಂದೆ ಮಾಡೋ ಎಲ್ಲ ಚಿತ್ರಗಳಲ್ಲೂ ಉಗ್ರಂ ನ ಛಾಪು ಇದ್ದೆ ಇರುತ್ತದೆ. ಕೆಜಿಎಫ್ ನಲ್ಲೂ ಇತ್ತು, ಇರುತ್ತದೆ ಕೂಡ. ಅದು ನನ್ನ ಸಿನಿಮಾಗಳ ರೀತಿ. ಆದರೆ ಸಲಾರ್ ಒಂದು ಹೊಸ ಕಥೆ. ಇದರ ಕಥೆಯಲ್ಲಿ ಉಗ್ರಂ ಯಾವ ರೀತಿಯ ಪ್ರಭಾವವನ್ನು ಬೀರಿಲ್ಲ. ಸಲಾರ್ ಉಗ್ರಂ ನ ರಿಮೇಕ್ ಅಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಸುಮಾರು ಶೇಕಡ 30ರಷ್ಟು ಚಿತ್ರೀಕರಣವನ್ನ ಸಲಾರ್ ಚಿತ್ರತಂಡ ಮುಗಿಸಿಕೊಂಡಿದೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿರೋ ಈ ಚಿತ್ರಕ್ಕೆ ಶೃತಿ ಹಾಸನ್ ನಾಯಕಿಯಾಗಿರಲಿದ್ದಾರೆ. ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗು ರವಿ ಬಸ್ರುರ್ ಅವರ ಸಂಗೀತ ಚಿತ್ರಕ್ಕಿರಲಿದ್ದು, ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಕೆಜಿಎಫ್ ಚಾಪ್ಟರ್ 2ರ ಬಿಡುಗಡೆಯ ಬಳಿಕ ಸಲಾರ್ ಚಿತ್ರದ ಉಳಿದ ಚಿತ್ರೀಕರಣ ಆರಂಭವಾಗೋ ಸಾಧ್ಯತೆಯಿದೆ.

Related posts

‘ಗಜಿನಿ’ ಬೆಡಗಿ ಬಾಳಲ್ಲಿ ಬಿರುಗಾಳಿ? ವಿಚ್ಛೇದನಕ್ಕೆ ಮುಂದಾದ್ರಾ ನಟಿ ಆಸಿನ್?

kartik

ಹಿಜಬ್ ಧರಿಸಿದ ಜನಪ್ರಿಯ ನಟಿ ಶ್ರುತಿ… ಕಾರಣ ಏನು ಗೊತ್ತಾ?

Nikita Agrawal

ರೈಡರ್ ನಿಖಿಲ್ ಗೆ ಮನಸೋತ ಸ್ಯಾಂಡಲ್ ವುಡ್ ನ ಮೋಹಕತಾರೆ

Nikita Agrawal

Leave a Comment

Share via
Copy link
Powered by Social Snap