ತೆಲುಗು ಸಿನಮಾರಂಗದಲ್ಲಿ ಇಷ್ಟು ದಿನ ಕಾದರೂ…ಹುಡುಕಿದರು ಇನ್ನೂ ಕೂಡ ಅಭಿಮಾನಿಗಳಿಗೆ ಉತ್ತರ ಸಿಗದೆ ಕಾಡುತ್ತಿರುವ ಪ್ರಶ್ನೆಯೆಂದರೆ ಪ್ರಭಾಸ್ ಯಾಕೆ ಮದುವೆಯಾಗಿಲ್ಲ…

ಹೌದು ಈಗಾಗಲೇ ಪ್ರಭಾಸ್ ಮದುವೆ ವಿಚಾರ ಸಾಕಷ್ಟು ಬಾರಿ ಚರ್ಚೆಯಾಗಿತ್ತು…ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ..ಅದಾದ ನಂತರ ಇನ್ನೂ ಸಾಕಷ್ಟು ಹುಡುಗಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕುತ್ತಲೇ ಇತ್ತು …ಆದರೆ ಈಗ ಟಾಲಿವುಡ್ ನ ನಂಬರ್ ಒನ್ ಪೂಜಾ ಹೆಗ್ಡೆ ಅವರಿಗೂ ಅದೇ ಪ್ರಶ್ನೆ ಕಾಡುತ್ತಿದೆ… ಹೌದು ಪ್ರಭಾಸ್ ಅವರನ್ನೇ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಪೂಜಾ ಪ್ರಶ್ನೆ ಮಾಡಿದ್ದಾರೆ ..

ಹಾಗಂತ ಪೂಜಾ ಈ ಪ್ರಶ್ನೆ ಮಾಡುತ್ತಿರುವುದು ನಿಜ ಜೀವನದಲ್ಲಲ್ಲ ನಿನ್ನೆಯಷ್ಟೇ ಬಿಡುಗಡೆಯಾಗಿರುವ ರಾಧೆಶ್ಯಾಮ್ ಸಿನಿಮಾದ ಟೀಸರ್ ನಲ್ಲಿ… ಈ ಪ್ರಶ್ನೆಯನ್ನ ಪೂಜಾ ಸಿನಿಮಾದ ನಾಯಕ ಶ್ಯಾಮ್ ಅವರಿಗೆ ಕೇಳಿದ್ದಾರೆ…
ರಾಧೆಶ್ಯಾಮ್ ಸಿನೆಮಾ ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ವೃತ್ತಿಜೀವನದಲ್ಲಿ ತುಂಬಾನೇ ಡಿಫರೆಂಟಾದ ಸಿನಿಮಾ ಎನ್ನಲಾಗುತ್ತಿದೆ…. ಇದೇ ಕಾರಣದಿಂದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿತ್ತು ಪ್ರಭಾಸ್ ಲವರ್ ಬಾಯ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ….ಈಗಾಗಲೇ ಟ್ರೇಲರ್, ಸಾಂಗು ಕುತೂಹಲ ಮೂಡಿಸಿತ್ತು ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ ..

ರಾಧೆಶ್ಯಾಮ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆ ಆಗುವ ಸಾಧ್ಯತೆಗಳಿದ್ದು ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ…ತೆಲುಗಿನಲ್ಲಿ ತಯಾರಾಗಿರುವ ರಾಧೆಶ್ಯಾಮ್ ಸಿನಿಮಾ ಕನ್ನಡ ಮಲಯಾಳಂ ಹಿಂದಿ ತಮಿಳು ಸೇರಿದಂತೆ 5ಭಾಷೆ ಗಳಲ್ಲಿ ತೆರೆಗೆ ಬರಲಿದೆ …
- ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿರುವುದಕ್ಕೆ ಕಲಾಪ ಸ್ಥಗಿತವೇ ಉತ್ತರ : ಶ್ರೀಧರ ಸಾಹುಕಾರ
- ಕ್ರೂಸರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು..!
- ಕಲ್ಯಾಣ ಕರ್ನಾಟಕ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
- ನೂತನ ಕಾರ್ಯಕಾರಿಣಿ ಸದಸ್ಯ ಮುದ್ನಾಳ್ ಗೆ ಸನ್ಮಾನ * ಮಲ್ಲನಗೌಡ ಪಾಟೀಲ್ ಹೇಳಿಕೆಯುವಕರ ರಾಜಕೀಯ ಪ್ರವೇಶ ಅತ್ಯಗತ್ಯ
- ಬಡ, ಪ್ರತಿಭಾವಂತ ಮಕ್ಕಳು ಮೆಡಿಕಲ್ ಓದಬೇಕನ್ನುವುದು ನನ್ನಾಸೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್
- ನ್ಯಾಯ ನಿಷ್ಠುರ ನಡೆಯ ಮುತ್ಸದ್ದಿ ಶಾಮನೂರ : ರಾಚನಗೌಡ ಮುದ್ನಾಳ
- ಚಾರಿತ್ರಿಕ ಸಿನೆಮಾಗಳು ಜನತೆಯ ಮನೋಧರ್ಮ ಬದಲಿಸಬಲ್ಲವು – ಡಾ.ಹೊನ್ಕಲ್
- ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ.
- ಎಣ್ಣಿ ಕುಡ್ಯಂಗ ಆಗ್ಯಾದ್ರಿ ಸಾಬ್ರೆ
- ಅರ್ಜುಣಗಿ ರೋಡ್ ನೋಡ್ರಿ ಹೆಂಗಾಗ್ಯಾದ
