21.1 C
Bengaluru
February 11, 2026
Karnataka Bhagya
Blogದೇಶ

ಮೂರು ವರ್ಷಗಳ ಪಯಣ ಮುಕ್ತಾಯವಾಯಿತು ಎಂದ ಕಿರುತೆರೆ ನಟ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ “ಮಿಥುನ ರಾಶಿ”ಯು ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಧಾರಾವಾಹಿಯಲ್ಲಿ ಮಿಥುನ್ ಪಾತ್ರದಲ್ಲಿ ಗಮನ ಸೆಳೆದಿದ್ದ ಸ್ವಾಮಿನಾಥನ್ ಅನಂತ್ ರಾಮನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಧಾರಾವಾಹಿಯ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

“ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ. ಎಂದಿಗೂ ಕೊನೆಗೊಳ್ಳದ ಅಪ್ಪುಗೆಗಳು , ಎಂದಿಗೂ ಹರಿಯುವ ಸಂತೋಷದ ಕಣ್ಣೀರು ಹಾಗೂ ಪುನರಾವರ್ತಿತ ವಿದಾಯಗಳೊಂದಿಗೆ ಮುಕ್ತಾಯವಾಯಿತು. ಮೂರು ವರ್ಷಗಳ ಪಯಣ ಈಗ ಕುಟುಂಬವನ್ನು ಮೀರಿದ ಸ್ನೇಹಿತರೊಂದಿಗೆ ಅಂತ್ಯಗೊಂಡಿದೆ” ಎಂದು ಬರೆದುಕೊಂಡಿದ್ದಾರೆ ಸ್ವಾಮಿನಾಥನ್.

“ಮನೆಗೆ ತೆಗೆದುಕೊಂಡು ಹೋಗಲು ಬ್ಯಾಗ್ ತುಂಬಾ ನೆನಪುಗಳು ಇವೆ ಹಾಗೂ ಜೀವಿತಾವಧಿಯಲ್ಲಿ ಪಾಲಿಸಲು ಹಾಗೂ ನಮ್ಮೆಲ್ಲರಿಗೂ ದೂರ ಸಾಗುವ ಮೂಲಕ ಉತ್ತಮ ಆರಂಭಕ್ಕೆ ಸೂಕ್ತವಾದ ಅಂತ್ಯ ಇದಾಗಿದೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ. ಈ ರೀತಿಯ ತಂಡದ ಜೊತೆ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದು ನಾನು ಹೇಳಬಲ್ಲೆ” ಎಂದು ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ ಸ್ವಾಮಿನಾಥನ್ ಅನಂತರಾಮನ್.

” ಈ ಮೂರು ವರ್ಷ ಪ್ರೇಕ್ಷಕರು ನೀಡಿದ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ಭಾರವಾದ ಹೃದಯದಿಂದ ಹೋಗುತ್ತಿದ್ದೇವೆ. ಮಿಥುನ್ ನ ಭಾಗ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ನರಹರಿ ರಾವ್ ಹಾಗೂ ವಿನೋದ್ ಧೋಂಡಾಳೆ ಸರ್ ಅವರು ನನ್ನನ್ನು ಮಿಥುನ್ ಪಾತ್ರಕ್ಕಾಗಿ ಆಯ್ಕೆ ಮಾಡಿದರು. ನಾನು ಇಂದು ಏನಾಗಿದ್ದೇನೆ ಅದಕ್ಕೆ ಧನ್ಯವಾದಗಳು. ಇಂದು ನನ್ನ ಬಳಿ ಏನಿರುವುದಕ್ಕೂ ನಾನು ಇಲ್ಲಿ ನಿಂತಿರುವುದು ನೀವಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಕಲರ್ಸ್ ಕನ್ನಡ ಈ ಅವಕಾಶಕ್ಕಾಗಿ ಧನ್ಯವಾದಗಳು”ಎಂದು ಬರೆದುಕೊಂಡಿದ್ದಾರೆ.

Related posts

ಕಿರುತೆರೆ ಖಳನಾಯಕಿಯ ಬಣ್ಣದ ಪಯಣ ಶುರುವಾಗಿದ್ದು ಹಿರಿತೆರೆಯಿಂದ

Nikita Agrawal

ಅಪ್ಪು ಅಭಿಮಾನಿಗಳಿಗೆ ಸಿಕ್ತು ಗಣರಾಜ್ಯೋತ್ಸವದ ಸರ್ ಪ್ರೈಸ್

Nikita Agrawal

ಬೇರೆ ಚಿತ್ರರಂಗಗಳಲ್ಲೂ ಪ್ರಶಂಸೆ ಪಡೆಯುತ್ತಿದೆ ‘777 ಚಾರ್ಲಿ’

Nikita Agrawal

Leave a Comment

Share via
Copy link
Powered by Social Snap