July 31, 2026
Karnataka Bhagya
Blogರಾಜಕೀಯ

“ವರದ” ಚಿತ್ರ ಹಾಡು ಮೆಚ್ಚಿದ ನೆನಪಿರಲಿ ಪ್ರೇಮ್.

ವಿನೋದ್ ಪ್ರಭಾಕರ್ ನಾಯಕರ ಗಾಗಿ ನಟಿಸಿರುವ “ವರದ” ಸಿನಿಮಾ‌ ತೆರೆಗೆ ಬರಲು ಸಿದ್ದವಾಗಿದೆ…ಈಗಾಗಲೇ‌ ಸಿನಿಮಾಗೆ ಸಾಕಷ್ಟು ಕಲಾವಿದರು ಸಾಥ್ ಕೊಟ್ಟಿದ್ದು ಚಿತ್ರವನ್ಮ ಉದಯ್ ಪ್ರಕಾಶ್ ನಿರ್ದೇಶನ‌‌ ಮಾಡಿದ್ದಾರೆ… ಇತ್ತೀಚಿಗಷ್ಟೇ ನಂದೀಶ್ ಬರೆದಿರುವ “ತುಟಿಯು ಹಾಡುತಿದೆ” ಎಂಬ ಹಾಡನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆರ್ ಜೆ ರಾಪಿಡ್ ರಶ್ಮಿ ಈ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.

ವಿನೋದ್ ಪ್ರಭಾಕರ್ ನಾಯಕನಾಗಿ‌ ಅಭಿನಯ ಮಾಡಿದ್ದು ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ…. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ…

ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Related posts

ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳೋದಕ್ಕೆ ಖುಷಿಯಿದೆ – ಶ್ರೀಲೀಲಾ

Nikita Agrawal

ತೆಲುಗು ಪ್ರೇಕ್ಷಕರು ನನ್ನನ್ನು ಸ್ವೀಕರಿಸಿದ್ದಾರೆ – ಪೂಜಾ ಹೆಗ್ಡೆ

Nikita Agrawal

ಯಶ್ ಡೈರೆಕ್ಷನ್ ಕ್ಯಾಪ್ ತೊಡ್ತಿದ್ದಾರಾ?? ಈ ಬಗ್ಗೆ ರಾಕಿಬಾಯ್ ಮನದಾಳದ ಮಾತೇನು ಗೊತ್ತಾ..?!

Nikita Agrawal

Leave a Comment

Share via
Copy link
Powered by Social Snap